
ಭಟ್ಕಳ: ಅಕ್ರಮವಾಗಿ ಸ್ಕೂಟರಲ್ಲಿ ದನದ ಸಾಗಾಟ ಮಾಡುತ್ತಿದ್ದ ವೇಳೆ ಹಾಗೂ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆಯ ವರಾಂಡದಲ್ಲಿ ದನದ ಮಾಂಸ ಕಟಾವು ಮಾಡುತ್ತಿರುವ ಸಮಯದಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಪೊಲೀಸರನ್ನು ನೋಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಓರ್ವ ಆರೋಪಿಯನ್ನು ಇಸ್ಮಾಯಿಲ್ ಹವ್ಯಾ ಇಸ್ಮಾಯಿಲ್ ಮೊಹಮ್ಮದ ಹುಸೇನ್ ಮೂಸಾನಗರ ನಿವಾಸಿ ಹಾಗೂ ಇನ್ನಿಬ್ಬರು ಆರೋಪಿತರ ಹೆಸರು ವಿಳಾಸ ತಿಳಿದು ಬಂದಿಲ್ಲವಾಗಿದೆ.
ಇವರು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿ ಸುಮಾರು 25 ಕೆ ಜಿ ತೂಕದ 7500 ರೂ ಬೆಲೆಯ ದನದ ಮಾಂಸವನ್ನು ಮೊದಲ ಆರೋಪಿ ಸ್ಕೂಟರ ನಂಬರ ಕೆಎ-47 ಕ್ಯೂ 4473 ನಲ್ಲಿ ಹಾಕಿಕೊಂಡು ಬದ್ರಿಯಾ ಕಾಲೋನಿಯ ಕಡೆಯಿಂದ ಮೂಸಾನಗರ 4 ನೇ ಕ್ರಾಸ್ ಮುಖಾಂತರ ಹಾಕಿಕೊಂಡು ಸಾಗಾಟ ಮಾಡಿಕೊಂಡು ಹೋಗುವಾಗ ಹಾಗೂ ಇನ್ನಿಬ್ಬರು ಆರೋಪಿತರೂ 35 ಕೆ ಜಿ ತೂಕದ 10,500 ರೂ ಬೆಲೆಯ ದನದ ಮಾಂಸವನ್ನು 1 ನೇ ಆರೋಪಿತನ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆ ವರಾಂಡದಲ್ಲಿ ಕಟಾವು ಮಾಡುತ್ತಿರುವ ಸಮಯದಲ್ಲಮೂಸಾನಗರ 4 ನೇ ಕ್ರಾಸ್ ಆರೋಪಿತನ 1 ನೇ ಮನೆಯ ಹತ್ತಿರ ಪಿ.ಎಸ್.ಐ ತಿಮ್ಮಪ್ಪ ಎಸ್. ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಆರೋಪಿತರು ಓಡಿ ಹೋಗಿದ್ದಾರೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
